Indian Police TV

ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಹಿರಿಯ ಅಧಿಕಾರಿಗಳ ಭೇಟಿ

ಶ್ರೀ ಗಣೇಶ ಹಬ್ಬದ ಪ್ರಯುಕ್ತ ಮೇಲ್ವಿಚಾರಣೆ ಸಲುವಾಗಿ ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಹಿರಿಯ ಅಧಿಕಾರಿಗಳ ಭೇಟಿ, ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಸಲಹೆ ಸೂಚನೆಗಳು.

ಸನ್ಮಾನ್ಯ ಶ್ರೀ ಎನ್ ಸತೀಶ್ ಕುಮಾರ, ಐ.ಪಿ.ಎಸ್, ಮಾನ್ಯ ಪೊಲೀಸ್ ಮಹಾನೀರಿಕ್ಷಕರು, ಕೇಂದ್ರ ಸ್ಥಾನ-01, ಕೇಂದ್ರ ಕಛೇರಿ ಬೆಂಗಳೂರು ರವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಭೇಟಿ ನೀಡಿ, ಶ್ರೀ ಗಣೇಶ ಹಬ್ಬದ ನಿಮಿತ್ಯ ಬಂದೋಬಸ್ತ ಕೈಕೊಂಡ ಯೋಜನೆಗಳ ಮತ್ತು ಬ/ಬ ಕರ್ತವ್ಯದ ಪ್ರಗತಿ ಪರಿಶೀಲನೆ ನಡೆಸಿ, ಬಂದೋಬಸ್ತ ವಿಷಯಗಳ ಬಗ್ಗೆ ಚರ್ಚಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೊಗುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಕಛೇರಿಯಲ್ಲಿಅಳವಡಿಸಿರುವ AI CCTV COMMAND & CONTROL CENTRE ಗೆ ಭೇಟಿ ನೀಡಿ ವಿಕ್ಷಣೆ ಮಾಡಿ ಪ್ರಶಂಸಿಸಿರುತ್ತಾರೆ.

ಮಾನ್ಯರು ಶ್ರೀ ಗಣೇಶ ಹಬ್ಬದ ಬಂದೋಬಸ್ತ ಕುರಿತು ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದು, ಮಾನ್ಯರ ಸಲಹೆ ಮತ್ತು ಸೂಚನೆಗಳನ್ನು ತಪ್ಪದೇ ಪಾಲನೆ ಮಾಡಲಾಗುವುದು. ಮಾನ್ಯರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದಕ್ಕೆ ಸಮಸ್ತ ಜಿಲ್ಲಾ ಪೊಲೀಸರಿಂದ ಧನ್ಯವಾದಗಳು.

Exit mobile version