ಡ್ರೋನ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಕಲಬುರಗಿ ಪೊಲೀಸ್ ಆಯುಕ್ತರು

0

ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ನೂತನವಾಗಿ ಒದಗಿಸಲಾದ Nimble-i ಮತ್ತು NS01 ಡ್ರೋನ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಈ ಡ್ರೋನ್‌ಗಳು AI-ಚಾಲಿತ ಕಣ್ಗಾವಲು ವೈಶಿಷ್ಟ್ಯತೆಯನ್ನು ಹೊಂದಿದ್ದು ಕಲಬುರಗಿ ನಗರ ಪೊಲೀಸ್ ಸೇವೆಗೆ ಸಜ್ಜುಗೊಂಡಿವೆ.

ಧಾರವಾಡದಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಭೆ

0

ಧಾರವಾಡ : ದಿನಾಂಕ 09-08-2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲ ಠಾಣೆಯ ಎಸ್‌ ಬಿ ಕಾನ್ಸ್ಟೇಬಲ್ ಗಳಿಗೆ ಹಾಗೂ ಸೊಷಿಯಲ್‌ ಮಿಡಿಯಾ ಸಿಬ್ಬಂದಿಗಳಿಗೆ ಸಭೆಯನ್ನು ಕೈಗೊಂಡು ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್‌-ಮಿಲಾದ್‌ ಹಬ್ಬಗಳ ಸೂಕ್ತ ಬಂದೋಬಸ್ತ್ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಹಲವು ನಿರ್ದೇಶನಗಳನ್ನು ನೀಡಿದರು.

ಬಾದಾಮಿ ಪೊಲೀಸರಿಂದ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲಾಯಿತು

0

ಬಾದಾಮಿ ನಗರದಲ್ಲಿ ದ್ವಿ ಚಕ್ರ ವಾಹನ ಸವಾರರಿಗೆ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು.

ಮತಿ ಉಮಾ ಪ್ರಶಾಂತ್ IPS ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು.

0

ದಾವಣಗೆರೆ : ರಕ್ಷಾ ಬಂಧನದ ಅಂಗವಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು

ಕುಂದಾಪುರ ನಗರದಲ್ಲಿ ಮನೆ ಮನೆಗೆ ಪೋಲೀಸ್ ಕಾರ್ಯಕ್ರಮ

0

ಉಡುಪಿ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬೀಟ್ ವ್ಯಾಪ್ತಿಯ ಪ್ರಮುಖರನ್ನು ಠಾಣೆಗೆ ಬರಮಾಡಿಕೊಂಡು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ, ದ್ರಷ್ಟಿ ಯೋಜನೆ, ಇ- ಬೀಟ್ ವ್ಯವಸ್ಥೆ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಯಿತು.

ರೋಣ ತಾಲೂಕಿನಲ್ಲಿ ಶಾಲೆ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ

0

ಈ ದಿನ ರೋಣ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೇರಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಪೋಕ್ಸೋ ಕಾಯ್ದೆ , ಭಿಕ್ಷಾಟನೆ ಹಾಗೂ ತುರ್ತು ಸಹಾಯವಾಣಿಗಳ ಕುರಿತು ಕಾನೂನು ಅರಿವು ಹಾಗೂ ನೆರವು ಬಗ್ಗೆ ಮಾಹಿತಿ ನೀಡಲಾಯಿತು.

ಮೈಸೂರಿನಲ್ಲಿ ಪೋಲೀಸರ ಕಾಲ್ನಡಿಗೆ ಮೂಲಕ ವಿಶೇಷ ಗಸ್ತು

0

ರಾತ್ರಿ ಮೇಟಗಳ್ಳಿ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಹಾಗೂ ರೌಡಿಗಳು/ಎಂಒಬಿಗಳು / ಸಮಾಜ ಘಾತುಕ ವ್ಯೆಕ್ತಿಯಗಳ ಮೇಲೆ ನಿಗಾವಹಿಸಲು ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿ ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ಸಲುವಾಗಿ ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಮೈಸೂರಿನಲ್ಲಿ ಬೀಟ್ ಸಭೆ

0

ಮೈಸೂರು ನಗರದ ಮಂಡಿ, ನಜರ್ ಬಾದ್, ಕೃಷ್ಣರಾಜ & ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿದ್ದು, ಬೀಟ್ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪ್ರದೇಶದ ಭದ್ರತೆ, ಶಂಕಿತ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವುದು, ಹಾಗೂ ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

“INDEPENDENCE DAY CUP” POLICE PREMIER LEAGUE SEASON – 03

0

ಇಂದು ಡಿ.ಎ.ಆರ್‌ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ “INDEPENDENCE DAY CUP” POLICE PREMIER LEAGUE SEASON – 03 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನ್ನು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉದ್ಘಾಟಿಸಿ, ಈ ಕ್ರಿಕೆಟ್ ಕ್ರೀಡಾ ಕೂಟದಲ್ಲಿ ಒಟ್ಟು 10 ಪೊಲೀಸ್ ತಂಡಗಳು ಭಾಗವಹಿಸಿದ್ದು ಎಲ್ಲಾ ತಂಡಗಳಿಗೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಹೇಶ ಮೇಘಣ್ಣವರ ಮತ್ತು DAR DSP ರವರಾದ ಶರಣಪ್ಪ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಲಾರದಲ್ಲಿ ಪೋಲೀಸರ ತಪಾಸಣೆ

0

ಕೋಲಾರ ಜಿಲ್ಲಾ ಪೊಲೀಸ್‌ ವತಿಯಿಂದ ಪ್ರತಿ ದಿನ ಅಧಿಕಾರಿ ಸಿಬ್ಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ದೈನಂದಿನ ಕರ್ತವ್ಯದೊಂದಿಗೆ ನಗರದಲ್ಲಿ ರಾತ್ರಿ ವಿಷೇಶ ಗಸ್ತು ಕರ್ತವ್ಯವನ್ನು ಕೈಗೊಂಡು ಪ್ರಮುಖ ಸಾರ್ವಜನಿಕ ಸ್ಥಳಗಲಾದ ದೇವಸ್ಥಾನ, ಮಸೀದಿ, ಬಸ್ ನಿಲ್ದಾಣ, ಲಾಡ್ಜ್ ಗಳಿಗೆ ಭೇಟಿ ನೀಡಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ATM, ಮತ್ತು ವಾಹನಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.