ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.


ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.


ಚಿತ್ರದುರ್ಗ: ಮಾನ್ಯ ಪೊಲೀಸ್ ಅಧೀಕ್ಷಕರ ನಿರ್ದೇಶನದ ಮೇರೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗದಲ್ಲಿ ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಉಮೇಶ್ ಈಶ್ವರ ನಾಯ್ಕ್ ರವರು ಚಿತ್ರದುರ್ಗ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನಲ್ಲಿ Mob operation parade, & ಲಾಟಿ ಪೇರೆಡ್ ಗಳ ವಿಕ್ಷಣೆ ನಡೆಸಿ, ಪರಿಶೀಲಿಸಿದರು.

ಮೈಸೂರು : ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಮಹಿಳಾ ಅಧಿಕಾರಿ & ಸಿಬ್ಬಂದಿಗಳು ಹೆಬ್ಬಾಳ್, ವಿ.ವಿ.ಪುರಂ, ಕೃಷ್ಣರಾಜ & ಉದಯಗಿರಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪಾರ್ಕ್ & ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು & ಹಿರಿಯ ನಾಗರೀಕರಿಗೆ ಮನೆಗಳ್ಳತನ, ಸರಗಳ್ಳತನ & ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ. 1930, 112 ಸಹಾಯವಾಣಿಗಳ ಬಗ್ಗೆ ತಿಳಿಸಿರುತ್ತಾರೆ.




ದಿನಾಂಕ:03.08.2025 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಬೆಳ್ಳಾವಿ ಗ್ರಾಮದ ಬಸವರಾಜು ರವರ ಪತ್ನಿ ಲಕ್ಷ್ಮೀದೇವಿಯು ತನ್ನ ಮಗಳು ತೇಜಸ್ವಿಯನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ವಾಪಾಸ್ ಬರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಬೇಕೆಂದು ಅವರ ಗಂಡ ಬಸವರಾಜು ರವರು ದಿನಾಂಕ 04-08-2025 ರಂದು ಬೆಳ್ಳಾವಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಮೊ.ನಂ 73/2025 ಕಲಂ ಹೆಂಗಸು ಕಾಣೆ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ:07/08/2025 ರಂದು ಕೊರಟಗೆರೆ ತಾಲ್ಲೂಕು ಚಿಂಪುಗಾನಹಳ್ಳಿ ಗ್ರಾಮದ ಸಮೀಪ ರಸ್ತೆಯಲ್ಲಿ, ಮುತ್ಯಾಲಮ್ಮ ದೇವಸ್ಥಾನದ ಬಳಿ, ಹಾಗೂ ಇತರೆ ಸ್ಥಳಗಳಲ್ಲಿ ಮಾನವನ ಮೃತದೇಹದ ಅಂಗಾಂಗಳು ಬಿದ್ದಿರುವ ಬಗ್ಗೆ ಚಿಂಪುಗಾನಹಳ್ಳಿ ಗ್ರಾಮದ ವಾಸಿ ಜಗದೀಶ್ ರವರು ಕೊರಟಗೆರೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೊಲೀಸ್ ಠಾಣಾ ಮೊ.ನಂ.166/2025, ಕಲಂ: 103(1), 238 BNS ರಿತ್ಯಾ ಪ್ರಕರಣ ದಾಖಲಿಸಿರುತ್ತೆ.
ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಗೋಪಾಲ್, ಸಿ. ಶ್ರೀ ಪುರುಷೋತ್ತಮ್ ಎಂ.ಎಲ್. ಮತ್ತು ಮಧುಗಿರಿ ಉಪ ವಿಭಾಗದ ಡಿ.ಎಸ್.ಪಿ ಶ್ರೀ ಮಂಜುನಾಥ, ಕೊರಟಗೆರೆ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀ ಅನಿಲ್ ಆರ್.ಪಿ ರವರುಗಳು ಮಧುಗಿರಿ ಉಪ ವಿಭಾಗದ ನುರಿತ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಒಟ್ಟು 19 ಸ್ಥಳಗಳಲ್ಲಿ ಮಾನವ ದೇಹದ ಅಂಗಾಂಗಗಳು ಬಿದಿದ್ದು ಅಮಾನತ್ತುಪಡಿಸಿಕೊಂಡಿರುತ್ತೆ.
ಬೆಳ್ಳಾವಿ ಪೊಲೀಸ್ ಠಾಣೆಯ ಮೊ.ನಂ 73/2025 ರ ಪ್ರಕರಣದ ಪಿರ್ಯಾದುದಾರರು ಮತ್ತು ಅವರ ಕುಟುಂಬದವರನ್ನು ಕರೆಯಿಸಿದ್ದು ಅವರು ಮೃತ ದೇಹವು 42 ವರ್ಷದ ಲಕ್ಷ್ಮೀದೇವಿಯವರದ್ದಾಗಿರುತ್ತದೆ ಎಂದು ಗುರ್ತಿಸಿರುತ್ತಾರೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಸಿ.ಗೋಪಾಲ್, ಮತ್ತು ಶ್ರೀ. ಎಂ.ಎಲ್ ಪುರುಷೋತ್ತಮ್ ರವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ, ಡಿ.ಎಸ್.ಪಿ ಮಧುಗಿರಿ, ಶಿರಾ ಬಿ.ಕೆ ಶೇಖರ್, ಡಿ.ಎಸ್.ಪಿ ಶಿರಾ, ಶ್ರೀ ಚಂದ್ರಶೇಖರ್ ಕೆ.ಆರ್. ಡಿ.ಎಸ್.ಪಿ ತುಮಕೂರು. ರವರ ನೇತೃತ್ವದಲ್ಲಿ ಶ್ರೀ ಅನಿಲ್ ಆರ್.ಪಿ, ಪಿ.ಐ ಕೊರಟಗೆರೆ, ಶ್ರೀ ಸುರೇಶ್, ಪಿ.ಐ ಪಾವಗಡ, ಶ್ರೀ ಕಾಂತರೆಡ್ಡಿ ಪಿ.ಐ ಬಡವನಹಳ್ಳಿ , ಶ್ರೀ ಹನುಮಂತರಾಯಪ್ಪ ಸಿ.ಪಿ.ಐ ಮಧುಗಿರಿ, ಶ್ರೀ ಅವಿನಾಶ್ ಪಿ.ಐ ತುಮಕೂರು ನಗರ ಠಾಣೆ ರವರುಗಳನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚಿಸಿದ್ದು ಸದರಿ ತಂಡವು ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ:-
ಡಾ: ರಾಮಚಂದ್ರಯ್ಯ ಎಸ್ ಬಿನ್ ಸಿದ್ದರಾಮಯ್ಯ, 47 ವರ್ಷ, ಕುರುಬ ಜನಾಂಗ, ದಂತ ವೈದ್ಯರು, 2ನೇ ಬ್ಲಾಕ್, 4 ನೇ ಕ್ರಾಸ್ ಪ್ರತೀಕ್ಷ ಹಾಸ್ಟೆಲ್ ಹಿಂಭಾಗ, ಕುವೆಂಪು ನಗರ ತುಮಕೂರು ಟೌನ್ ಸ್ವಂತ ವಿಳಾಸ: ಹೊಂಬೈನಪಾಳ್ಯ ಶಿರಾ ಗೇಟ್, ತುಮಕೂರು ಟೌನ್
ಸತೀಶ ಕೆ ಎನ್ ಬಿನ್ ನಾರಾಯಣ ಮೂರ್ತಿ, 38 ವರ್ಷ, ವಕ್ಕಲಿಗರು ವ್ಯವಸಾಯ, ಕಲ್ಲಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ
ಕಿರಣ್ ಕೆ ಎಸ್ ಬಿನ್ ಲೇಟ್ ಸುರೇಶ್, 32 ವರ್ಷ, ವಕ್ಕಲಿಗರು, ವ್ಯವಸಾಯ, ಕಲ್ಲಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ
ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು ಅವರು ಮೃತಳನ್ನು ಕೊಲೆ ಮಾಡಿ ಸಾಕ್ಷಾಧಾರವನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಕವರ್ಗಳಲ್ಲಿ ಹಾಕಿ ಅಲ್ಲಲ್ಲಿ ಬಿಸಾಕಿರುವುದಾಗಿ ತಿಳಿದುಬಂದಿರುತ್ತದೆ.
ಕೃತ್ಯ ಬೆಳಕಿಗೆ ಬಂದ ನಂತರ ಹಗಲಿರುಳು ಶ್ರಮಿಸಿ ಮೃತದೇಹದ ವಾರಸುದಾರರನ್ನು ಹಾಗೂ ಆರೋಪಿಗಳನ್ನು ಪತ್ತೆಹಚ್ಚಲು ಶ್ರಮಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮುಕ್ತ ಕಂಠದಿಂದ ಪ್ರಶಂಸಿಸಲಾಗಿದೆ.



ಕಲಬುರಗಿ : ದಿನಾ೦ಕ: 07-08-2025 ರಂದು ಫಿರ್ಯಾದಿದಾರರಾದ ಶ್ರೀ ನಜರೋದ್ದೀನ ತಂದೆ ರುಕ್ಕೋದ್ದೀನ
ಮುಲ್ಲಾ ರವರು ಯಾರೋ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ನೀಡಿದ ದೂರು ದಾಖಲಿಸಿದ ರಾಘವೇಂದ್ರ ನಗರ ಠಾಣೆ ಪೊಲೀಸರು. ಸದರಿ ಪ್ರಕರಣದ ಆರೋಪಿತರ ಪತ್ತೆ ಕುರಿತು
ಶ್ರೀಮತಿ ಕನಿಕಾ ಸಿಕ್ರಿವಾಲ್., ಐ.ಪಿ.ಎಸ್ ಉಪ-ಪೊಲೀಸ್ ಆಯುಕ್ತರು ಕಲಬುರಗಿ ನಗರ,
ಶ್ರೀ ಪ್ರವೀಣ್ ಹೆಚ್. ನಾಯಕ್, ಉಪ ಪೊಲೀಸ್ ಆಯುಕ್ತರು ಕಲಬುರಗಿ ನಗರ ರವರ
ಮಾರ್ಗದರ್ಶನದಲ್ಲಿ ಶ್ರೀ ಶರಣಬಸಪ್ಪ ಸುಬೇದಾರ, ಸಹಾಯಕ ಹೊಲೀಸ್ ಆಯುಕ್ತರು ದಕ್ಷಿಣ
ಉಪ-ವಿಭಾಗ ಕಲಬುರಗಿ ನಗರ ರವರ ನೇತೃತ್ವದಲ್ಲಿ ಶ್ರೀ ದಿಲೀಪಕುಮಾರ ಬಿ ಸಾಗರ ಪಿ.ಐ ಪ್ರಭಾರಿ
ರಾಘವೇಂದ್ರ ನಗರ ಹೊಲೀಸ್ ಠಾಣೆ ಮತ್ತು ಶ್ರೀ ಸುಭಾಶಚಂದ್ರ ಪಿ.ಎಸ್.ಐ, ಶ್ರೀ ಮಲ್ಲಿಕಾರ್ಜುನ ಜಾನೆ
ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಶ್ರೀ ಮಲ್ಲನಗೌಡ ಹೆಚ್.ಸಿ, ಶ್ರೀ ಉಮೇಶ ಪಿಸಿ, ಶ್ರೀ ಅರೇಶ ಪಿ.ಸಿ,
ಶ್ರೀ ಆತ್ಮಕುಮಾರ ಷಿ.ಸಿ, ಶ್ರೀ ಶರಣಬಸವ ಪಿ.ಸಿ, ಶ್ರೀ ರಾಜಕುಮಾರ ಹೆಚ್.ಸಿ, ಶ್ರೀ ಕರಣಕುಮಾರ ಪಿಸಿ,
ಶ್ರೀ ಬಸವರಾಜ ಪಿ.ಸಿ, ಶ್ರೀ ತುಕಾರಾಮ ಪಿ.ಸಿ, ಶ್ರೀ ಜಾಕೀರ ಎ.ಪಿ.ಸಿ ರವರನ್ನೊಳಗೊ೦ಡ ತ೦ಡವು ಮಾಹಿತಿ
ಕಲೆಹಾಕಿ ದಿನಾ೦ಕ: 08-08-2025 ರಂದು ಆರೋಪಿತನಾದ ಮಹ್ಮದ್ ಸಾದೀಕ್ ತಂದೆ ಲಾಡ್ಲೆ ಪಟೇಲ್ ಇತನನ್ನು ವಶಕ್ಕೆ
ಪಡೆದುಕೊಂಡು ಸದರಿ ಆರೋಪಿತನಿಗೆ ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು
ಕಲಬುರಗಿ ನಗರದ ವಿವಿಧ ಸ್ಥಳದಲ್ಲಿ ಕಳ್ಳತನ ಮಾಡಿದ 05 Spelender Plus, 02 HONDA DEO,
01 HONDA ACTIVA, 01 PASSION PRO, 01 NS160 PULSAR ಹೀಗೆ ಒಟ್ಟು 10 ವಿವಿಧ
ಕಂಪನಿಯ ದ್ವಿ-ಚಕ್ರ ವಾಹನಗಳ ಅಂ೦.ಕಿ. 5,00,000/-ರೂಪಾಯಿ ಮೌಲ್ಯದ ಸ್ಪತ್ತನ್ನು ವಶಪಡಿಸಿಕೊಂಡಿದ್ದು
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಹೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ| ಶರಣಪ್ಪ IFLR, ಐ.ಪಿ.ಎಸ್ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.

ಶಹಾಬಾದ ಉಪವಿಭಾಗದ ವಾಡಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಬರುವ ಕೊಲ್ಲೂರು, ಕಡಬೂರು ಮತ್ತು ಇಂದಿರಾನಗರದಲ್ಲಿ “ಮನೆ-ಮನೆಗೆ ಪೊಲೀಸ್” ಎಂಬ ಪರಿಕಲ್ಪನೆಯಡಿ ಮನೆಗಳಿಗೆ ಭೇಟಿ ನೀಡಿ, ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಿ ಅರಿವು ಮೂಡಿಸಲಾಯಿತು.








ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಯಾದಘಟ್ಟ ಗ್ರಾಮದಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ:09.08.2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ದಿನಾಂಕ 10/08/2025 ರಂದು ಮಹಿಳಾ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಜಯಪುರ ಶಹರದ ರಾಜಕುಮಾರ್ ಲೇ ಔಟ್ ನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡು ಮತ್ತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಪೋಕ್ಸೋ ಕಾಯ್ದೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,ಮಹಿಳೆ ಮತ್ತು ಮಕ್ಕಳ ರಕ್ಷಣೆ,ಸೈಬರ್ ಕ್ರೈಂ ,112 ERSS, 1098 ಮಕ್ಕಳ ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಿದ್ದು ಇರುತ್ತದೆ.


ಕೋಲಾರ ಜಿಲ್ಲಾ ಪೊಲೀಸ್ವತಿಯಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ “ಮನೆ ಮನೆಗೆ ಪೊಲೀಸ್” ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಹಾಗೂ ಸಾರ್ವಜನಿಕ ಸಭೆ ಸೇರಿಸಿ ಕುಂದುಕೊರತೆ ವಿಚಾರಿಸಿ ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು ಹಾಗೂ ಸೈಬರ್ ಅಪರಾಧ ,112, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ, ಬಾಲಕಾರ್ಮೀಕ ಪದ್ದತಿ, ಬಾಲ್ಯ ವಿವಾಹ, ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.











ಬೀದರ ನಿವಾಸಿಯೊಬ್ಬರು ಬೀದರ ಗುಂಪಾ ಹತ್ತಿರದ Reliance Trends ದಲ್ಲಿ 10,000=00 ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನು ಖರೀದಿಸಿ ಆಟೊದಲ್ಲಿ ಗುಂಪಾದಿಂದ ಪ್ರಯಾಣಿಸಿ ಬೀದರದ ಗುರುದ್ವಾರ್ ಕಮಾನ ಹತ್ತಿರ ಇಳಿದುಕೊಂಡು ಹೋಗಿರುತ್ತಾರೆ. ಸ್ವಲ್ಪ ಸಮಯದ ನಂತರ ತಮ್ಮ ಹತ್ತಿರದ ಬ್ಯಾಗಿನ ಬಗ್ಗೆ ಅರಿವು ಆದಾಗ ತಮ್ಮ ಬ್ಯಾಗನ್ನು ಆಟೋದ ಹಿಂದುಗಡೆ ಸಿಟಿನ ಮೇಲೆ ಬಿಟ್ಟಿರುವುದನ್ನು ಗಮನಿಸಿ, ಪ್ರಯಾಣಿಕ ಬೀದರದ AI ಸಿ.ಸಿ ಟಿವಿ ಕಮಾಂಡ ಸೆಂಟರ್ ಗೆ ಬಂದು ತಾವು ಪ್ರಯಾಣಿಸಿದ ಆಟೋವನ್ನು AI ಸಿ.ಸಿ ಟಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಹರ್ಷವರ್ಧನ ರವರು ಡಾ: ಬಿ.ಆರ್ ಅಂಬೇಡ್ಕರ ವೃತ್ತದ ಹತ್ತಿರ ವಾಹನ ಸಂಚರಿಸುತ್ತಿದ್ದನ್ನು ಗಮನಿಸಿ ಶ್ರೀ ಶ್ರೀಕಾಂತ, ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರವರ ಸಹಾಯದಿಂದ ಆಟೋವನ್ನು ಬೀದರ ಜಿಲ್ಲಾ ಪೊಲೀಸ್ ಅಧಿಕ್ಷಕರ ಕಛೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ, ಆಟೋದ ಹಿಂದುಗಡೆ ಇದ್ದ ಬ್ಯಾಗನ್ನು ಶ್ರೀ ಹರ್ಷವರ್ಧನ ಮತ್ತು ಶ್ರೀ ಶ್ರೀಕಾಂತ ರವರ ಸಮಕ್ಷಮ ಆಟೋ ಡ್ರೈವರ ರವರ ಮುಖಾಂತರ ಬ್ಯಾಗಿನ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪ್ರಮಾಣಿಕತೆ ಮೇರೆದ ಆಟೋ ಸಂ: KA38 6701 ಚಾಲಕ ಶ್ರೀ ಮಂಜುನಾಥ ರವರಿಗೆ ಸಮಸ್ತ ಬೀದರ ಜಿಲ್ಲಾ ಪೊಲೀಸರಿಂದ ಅಭಿನಂದನೆಗಳು. ನಿಮ್ಮ ಪ್ರಾಮಾಣಿಕತೆ ಎಲ್ಲರಿಗೂ ಪ್ರೇರಣೆ ಆಗಲಿ.

