ಚಾಮರಾಜನಗರ ಜಿಲ್ಲೆಯಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ

ಚಾಮರಾಜನಗರ: “ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮದ ಅಂಗವಾಗಿ ಕೊಳ್ಳೇಗಾಲ ಪಟ್ಟಣ, ಕೊಳ್ಳೇಗಾಲ ಗ್ರಾಮಾಂತರ, ಹಾಗೂ ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿಸುರಕ್ಷತೆ, ಭದ್ರತೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕರಿಂದ ಇಲಾಖೆಗೆ ಸಂಬಂಧಿಸಿದ ಅಹವಾಲು ಮತ್ತು ಸಲಹೆಗಳ ಕುರಿತು ಚರ್ಚಿಸಲಾಯಿತು.

ಕೊಪ್ಪಳನಗರದಲ್ಲಿ ಪೋಲೀಸರ ಪಥಸಂಚಲನ

ಕೊಪ್ಪಳ: ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಸನರಸ್ತೆ, ಶಿವಾಜಿ ಸರ್ಕಲ್, ಕೋಟೆ ಏರಿಯಾ, ಗೌರಿ ಅಂಗಳ, ವಾರಕಾರ ಓಣಿ, ದಿಡ್ಡಿಕೇರಿ, ಹುಲಿಕೇರಿ, ಗಡಿಯಾರ ಕಂಬ ಮುಖಾಂತರ ಪಥಸಂಚಲನ ನಡೆಸಲಾಯಿತು

ಶಿರಗುಪ್ಪದಲ್ಲಿ ಗೌರಿ-ಗಣೇಶ, ಈದ್ -ಮಿಲಾದ್ ಹಬ್ಬಗಳ ಪ್ರಯುಕ್ತ ಶಾಂತಿ ಸಭೆ

ಬಳ್ಳಾರಿ: ಮುಂಬರುವ ಗೌರಿ-ಗಣೇಶ, ಹಿದ್ -ಮಿಲಾದ್ ಹಬ್ಬಗಳನ್ನು ಸಾರ್ವಜನಿಕರು ಶಾಂತ & ಸುರಕ್ಷಾತಾ ರೀತಿಯಲ್ಲಿ ಆಚರಣೆ ಮಾಡಲು , ಸರ್ಕಾರಿ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ & ಶಾಂತಿ ಸಭೆಯನ್ನು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು ಈ ಸಮಯದಲ್ಲಿ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕೋಲಾರದಲ್ಲಿ ಕಳುವಾಗಿದ್ದ ಮೊಬೈಲ್​ಗಳನ್ನ ಪತ್ತೆ ಹಚ್ಚಿದ ಪೊಲೀಸರು

ಕೋಲಾರ: ಕೋಲಾರ ಜಿಲ್ಲೆಯ ಗಲ್ ಪೇಟೆ, ಮುಳಬಾಗಿಲು ನಗರ, ಮಾಲೂರು ಮತ್ತು ಕೋಲಾರ ನಗರ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಮೈಸೂರಿನಲ್ಲಿ ರಾತ್ರಿ ಪೋಲೀಸರ ವಿಶೇಶ ಗಸ್ತು…!

ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಹಾಗೂ ರೌಡಿಗಳು/ಎಂಒಬಿಗಳು/ಸಮಾಜ ಘಾತುಕ ವ್ಯೆಕ್ತಿಯಗಳ ಮೇಲೆ ನಿಗಾವಹಿಸಲು ಕಮಾಂಡೋ ಪಡೆಯೊಂದಿಗೆ ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿ ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ಸಲುವಾಗಿ ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಕಾಡುಗೋಡಿಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸೌಹಾರ್ದತೆ ಸಭೆ

ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ದಿನ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಶಾಂತಿ ಸೌಹಾರ್ದತೆ ಸಭೆಯನ್ನು ಹಮ್ಮಿಕೊಂಡಿದ್ದು ಹಾಗೂ ಹಬ್ಬದ ಆಚರಣೆ ಬಗ್ಗೆ ಕೆಲವು ಸಲಹೆ ಮತ್ತು ಸೂಚನೆಗಳನ್ನು ಎಸಿಪಿ ಮೇಡಂ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಅವರು ನೀಡಿರುತ್ತಾರೆ.

79 ನೇ ಸ್ವಾತಂತ್ರೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ದ್ವಜಾರೋಹಣ

79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಕಛೇರಿಯಲ್ಲಿ ಡಾ. ರವಿಕಾಂತೇಗೌಡ ಐಪಿಎಸ್, ಮಾನ್ಯ ಐಜಿಪಿ ಪೂರ್ವ ವಲಯ ರವರು ದ್ವಜಾರೋಹಣ ನೆರೆವೇರಿಸಿದರು. ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರು ಸೇರಿದಂತೆ ಪೊಲೀಸ್ /ಲಿಪಿಕಾ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ 79 ನೇ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ತಿಳಿಸಿದರು.