ಇಬ್ಬರ ಬೈಕ್ ಖಧೀಮರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ ವಶ

0


ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಪಿ.ಸುನಿಲ್ ರವರ ಆದೇಶದಂತೆ ಅಪರಾದ ವಿಭಾಗದ ಪಿ.ಎಸ್.ಐ ರವರಾದ ಕೆ.ಎ.ಚಂದ್ರ ಹಾಗೂ ಸಿಬ್ಬಂದಿಗಳಾದ ಎ.ಆರ್.ಎಸ್.ಐ ಸಂಜಯ್ ಹೆಚ್.ಸಿ-151 ನಾರಾಯಣ, ಹೆಚ್.ಜಿ ರೆಹಮಾನ್ ಉರ್ ಅಜೀಜ್ ರವರುಗಳು ದಿನಾಂಕಃ 07.07.2026 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಕಡಕೊಳ ಉಪಪೊಲೀಸ್ ಠಾಣೆಯ ಮುಂಭಾಗ ವಾಹನಗಳ ತಪಾಸಣೆ ಕೈಗೊಳ್ಳುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಒಂದು ಹೀರೋ ಸ್ಲೆಂಡರ್ ಬೈಕ್‌ನಲ್ಲಿ ಇಬ್ಬರೂ ಆಸಾಮಿಗಳು ಬರುತ್ತಿದ್ದು ಸದರಿ ವಾಹನವನ್ನು ನಿಲ್ಲಿಸಿ ವಿಚಾರಣೆ ಮಾಡಲಾಗಿ ಸದರಿ ವಾಹನವನ್ನು ಕಳ್ಳತನ ಮಾಡಿರುವುದಾಗಿ ಹಾಗೂ ಇನ್ನೂ ಕೆಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿ ಮೊ.ಸಂ 248/2026 ಕಲಂ 303(2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1) ನವಾಜ್ ಖಾನ್ @ ಸೂಪಿ ಬಿನ್ ಅಮ್ಜದ್ ಖಾನ್, 25 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, # 174, 3 ನೇ ಕ್ರಾಸ್, ಮಹದೇವಪುರ, ಮೈನ್ ರೋಡ್, ಶಾಂತಿನಗರ, ಸೊಸೈಟಿ ಪಕ್ಕ, ಮೈಸೂರು,
2) ಮಹಮ್ಮದ್ ಫರಾನ್ ಬಿನ್ ಇಲಿಯಾಜ್ ಅಹಮದ್, 22 ವರ್ಷ, ಮುಸ್ಲಿಂ ಜನಾಂಗ, ಕಡ್ಲೆ ಬೀಜ ವ್ಯಾಪಾರ, ಮೀನಾಬಜಾರ್ ಹತ್ತಿರ, ಮನೆ ನಂ 847, 13 ನೇ ಕ್ರಾಸ್, ಉಸ್ಮಾನಿಯಾ ಸಿ ಬ್ಲಾಕ್ ಬೀಡಿ ಕಾಲೋನಿ, ಮೈಸೂರು
ಇಬ್ಬರು ಕಳ್ಳರಿಂದ ವಶಪಡಿಸಿಕೊಂಡ ದ್ವಿಚಕ್ರವಾಹನಗಳ ವಿವರ
1)ಏಂ-11 ಇW-4219, ಪ್ಯಾಶನ್ ಪ್ರೊ ಬೈಕ್,
2)ಏಂ-02, ಊಓ-672 ಬಜಾಜ್ ಡಿಸ್ಕವರಿ ಬೈಕ್,
3)ಏಂ-45 W-9984 ಟಿವಿಎಸ್ ಅಪ್ಪಾಚಿ ಖಖಿಖ ಬೈಕ್
4)ಏಂ-55. W-5470 ಹೋಂಡಾ ಆಕ್ಟೀವಾ ಸ್ಕೂಟರ್
5) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್
6)ಏಂ-01 ಇಘಿ-5304 ಹೋಂಡಾ ಆಕ್ಟೀವಾ ಸ್ಕೂಟರ್,
7) ನಂಬರ್ ಪ್ಲೇಟ್ ಇಲ್ಲದ ಹೀರೋ ಸ್ಲೆಂಡರ್ ಬೈಕ್,
8) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್,
9) ನಂಬರ್ ಪ್ಲೇಟ್ ಇಲ್ಲದ ಮ್ಯಾಸ್ಟ್ರೋ ಬೈಕ್,

ಅಮಾನತ್ತು ಪಡಿಸಿಕೊಂಡ 09 ಬೈಕ್‌ಗಳ ಒಟ್ಟು ಮೌಲ್ಯ ಸುಮಾರು 3,90,000/- ರೂಪಾಯಿಗಳಾಗಿರುತ್ತದೆ.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್, ಅಪರ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್, ಹಾಗೂ ನಾಗೇಶ್ ಎಲ್. ಮೈಸೂರು ಗ್ರಾಮಾಂತರ ಉಪ-ವಿಭಾಗದ ಉಪಾದೀಕ್ಷಕರಾದ ರಾಜಣ್ಣ, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ನಿರೀಕ್ಷಕರಾದ ಎಸ್.ಪಿ. ಸುನಿಲ್, ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಕೆ ಎ ಚಂದ್ರ, ಸಿಬ್ಬಂದಿಗಳಾದ ಎಆರ್ ಎಸ್ ಐ, ಸಂಜಯ್, ಹೆಚ್ ಸಿ-151 ನಾರಾಯಣ, ಪ್ರಕಾಶ್ ಎಲ್. ಸಿ. ಹೆಚ್. ಸಿ.-322, ಪವನ್ ಕುಮಾರ್ ಪಿಸಿ-30, ಯೋಗೇಶ ಪಿಸಿ-276, & ಹೆಚ್ ಜಿ- ರೆಹಮಾನ್ ಉರ್ ಅಜೀಜ್ ಮತ್ತು ಪೊಲೀಸ್ ಬಾತ್ಮೀದಾರರಾದ ಲಕ್ಷ್ಮಣರಾವ್, ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ಭರ್ಜರಿ ಭೇಟೆಯಾಡಿದ ಮೈಸೂರು ಜಿಲ್ಲಾ ಪೊಲೀಸರು

0

ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಮಾರ್ಬಳ್ಳಿಹುಂಡಿ ಗ್ರಾಮದ ಶ್ರೀಮತಿ ಅನಿತಾ.ಎಂ.ಹೆಚ್ ಕೋಂ ಮಂಜುನಾಥ್ ಎಂಬುವವರು ದಿನಾಂಕ: 18-06-2026 ರಂದು ಜಯಪುರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಎಂದರೆ ತಮ್ಮ ಬಳಿಯಿದ್ದ 58 ಗ್ರಾಂ ತೂಕದ ಚಿನ್ನದ ಲಾಂಗ್ ನೆಕ್ಲೆಸ್ ಮತ್ತು 10 ಗ್ರಾಂ ತೂಕದ ಮುತ್ತಿನ ಚಿನ್ನದ ಓಲೆ & ಜುಮುಕಿಯನ್ನು ಮನೆಯ ಬೀರುವಿನಲ್ಲಿ ಇಟ್ಟಿದ್ದು ದಿನಾಂಕ 15-06-2026 ರಂದು ನೋಡಿದಾಗ ಎರಡೂ ಆಭರಣಗಳು ಕಳುವು ಆಗಿರುವುದು ತಿಳಿದ ಬಂದ ಮೇರೆಗೆ ಅಕ್ಕ-ಪಕ್ಕ ವಿಚಾರ ಮಾಡಿ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ 117/2026 ಕಲಂ, 305 ಬಿಎನ್‌ಎಸ್ ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.


ಮೈಸೂರು ಗ್ರಾಮಾಂತರ ವೃತ್ತದ ಸಿಪಿಐ ಡಿ.ಬಿ.ಜಯಪ್ರಕಾಶ್ ರವರ ನೇತೃತ್ವದಲ್ಲಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಜಯಪುರ ಪೊಲೀಸ್ ಠಾಣಾ ಪಿಎಸ್‌ಐ ಪ್ರಕಾಶ್ ಎತ್ತಿನಮನಿ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಿಗೆ ಭಾತ್ಮಿದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 30-06-2026 ರಂದು ಬೆಂಗಳೂರಿನ ಮಹಾಲಕ್ಷಿ ಲೇ ಔಟ್‌ನ ಎಪಿಎಂಸಿ ಸಮೀಪ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, ಎಂಬಾತನನ್ನು ವಶಕ್ಕೆ ತೆಗೆದುಕೊಂಡು, ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ರಂಗೇಗೌಡನು ಬನ್ನೂರು, ಮೈಸೂರು ದಕ್ಷಿಣ, ಹುಣಸೂರು ಗ್ರಾಮಾಂತರ, ಸಾಲಿಗ್ರಾಮ ಮತ್ತು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ್ದ ಚಿನ್ನದ ಆಭರಣಗಳನ್ನು ಹಾಸನ ಟೌನಿನ ದೊಡ್ಡಗರಡಿ ಬೀದಿಯಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುವ ಮರ‍್ನಾಲ್ಕು ಜನರಿಗೆ ಕೊಟ್ಟು ಹಣವನ್ನು ಪಡೆದುಕೊಂಡಿದ್ದು ಹಾಗೂ ಈಗಾಗಲೇ ಈತನ ಮೇಲೆ ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಒಟ್ಟು 17 ಕೇಸುಗಳು ದಾಖಲಾಗಿರುವ ವಿಚಾರವು ತಿಳಿದು ಬಂದಿರುತ್ತೆ. ಈತನ ದಸ್ತಗಿರಿಯಿಂದ ವಿವಿಧ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 08 ಕಳವು ಪ್ರಕರಣಗಳು ಪತ್ತೆಯಾಗಿರುತ್ತೆ. ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ದಸ್ತಗಿರಿ ಮಾಡಿದ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, 39 ವರ್ಷ, ಮುದಿಗೆರೆ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲ್ಲೂಕು, ಹಾಸನ ಜಿಲ್ಲೆ. ಆರೋಪಿಯಿಂದ ವಶಪಡಿಸಿಕೊಂಡ ಮಾಲಿನ ವಿವರ
ಒಟ್ಟು 498 ಗ್ರಾಂ ತೂಕದ ಚಿನ್ನದ ಒಡವೆಗಳು. ಒಟ್ಟು ಮೌಲ್ಯ ಸುಮಾರು 65, 25, 000/- ರೂಪಾಯಿಗಳು ಆರೋಪಿ ದಸ್ತಗಿರಿಯಿಂದ ಪತ್ತೆಯಾದ ಇತರೆ ಠಾಣೆಗಳ ಪ್ರಕರಣಗಳು ಪತ್ತೆಯಾಗಿವೆ.

ಠಾಣೆಯ ಹೆಸರು ಪತ್ತೆಯಾದ ಪ್ರಕರಣಗಳ ಸಂಖ್ಯೆ, ಜಯಪುರ ಪೊಲೀಸ್ ಠಾಣೆಯ 02 ಪ್ರಕರಣ, ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯ 02, ಇಲವಾಲ ಪೊಲೀಸ್‌ ಠಾಣೆಯ 1, ಮೈಸೂರು ದಕ್ಷಿಣ ಪೊಲೀಸ್‌ ಠಾಣೆಯ 1, ಬನ್ನೂರು ಪೊಲೀಸ್‌ ಠಾಣೆಯ 1, ಸಾಲಿಗ್ರಾಮ ಪೊಲೀಸ್‌ ಠಾಣೆಯ 01 ಪ್ರಕರಣ ಸೇರಿ ಒಟ್ಟು 08 ಪ್ರಕರಣಗಳು ಪತ್ತೆಯಾಗಿವೆ ಎಂದು ಮೈಸೂರು ಜಿಲ್ಲಾ ಎಸ್‌ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರುಗಳಾದ ಸಿ. ಮಲ್ಲಿಕ್ ಹಾಗೂ ನಾಗೇಶ್.ಎಲ್, ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಬಿ.ಜಯಪ್ರಕಾಶ್, ಜಯಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಕಾಶ್ ಎತ್ತಿನಮನಿ ರವರು ಹಾಗೂ ಸಿಹೆಚ್‌ಸಿ-೨೩೧ ಪಚ್ಚೇಗೌಡ, ಪಿಸಿ-೩೯ ನಿಂಗಣ್ಣ ರವರುಗಳು ಮೇಲ್ಕಂಡ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿರೆ.

2024ನೇ ಬ್ಯಾಚ್ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಭೇಟಿ…!

0

ಕರ್ನಾಟಕ ರಾಜ್ಯಕ್ಕೆ ನೇಮಕವಾಗಿರುವ 2024ನೇ ಬ್ಯಾಚ್‌‌ನ ಪ್ರೊಬೆಷನರಿ ಐ.ಪಿ.ಎಸ್‌ ಅಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿಯಾದರು. ಈ ವೇಳೆ ಮಹತ್ತರ ಜವಾಬ್ದಾರಿ ಹೊತ್ತು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಈ ಎಲ್ಲಾ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಭಿನಂದಿಸಿ, ಶುಭ ಹಾರೈಸಿದರು.

ರಾಜ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಾದ ಎಂ.ಎ.ಸಲೀಂ, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ರವಿ ಅವರು ಈ ವೇಳೆ ಉಪಸ್ಥಿತರಿದ್ದರು.

ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ನಂತರ ಡಿ ಎ ಆರ್ ಕೇಂದ್ರಸ್ಥಾನದ ಆವರಣದಲ್ಲಿ ಚಾಮರಾಜನಗರ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ ‘ಜಿಲ್ಲಾ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ-2025’ ರ ಸಮಾರೋಪ ಕಾರ್ಯಕ್ರಮ

0

ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ನಂತರ ಡಿ ಎ ಆರ್ ಕೇಂದ್ರಸ್ಥಾನದ ಆವರಣದಲ್ಲಿ ಚಾಮರಾಜನಗರ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ ‘ಜಿಲ್ಲಾ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ-2025’ ರ ಸಮಾರೋಪ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ, ಸಂಚಾರಿ ನಿಯಮಗಳು, ಸೈಬರ್ ಕ್ರೈಂ 112 ಮತ್ತು 1930 ಬಗ್ಗೆ ಮಾಹಿತಿ

0

ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚಳಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪಿಎಸ್ಐ ಕುಷ್ಟಗಿ ರವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ, ಸಂಚಾರಿ ನಿಯಮಗಳು, ಸೈಬರ್ ಕ್ರೈಂ 112 ಮತ್ತು 1930 ಬಗ್ಗೆ ಮಾಹಿತಿಯನ್ನು ನೀಡಲಾಯಿತು.

Run for unity ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್

0

ಸರ್ದಾರ್ ವಲ್ಲಭಬಾಯ್ ಪಟೇಲ್ ರವರ 150ನೇ ಜನ್ಮದಿನಾಚರಣೆಯ ಅಂಗವಾಗಿ, ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಿಂದ ಏಕತಾ ಓಟವನ್ನು (“Run for unity”) ಹಮ್ಮಿಕೊಂಡಿದ್ದು, ಜಿಲ್ಲಾ ಮಟ್ಟದ್ದ ಅಧಿಕಾರಿಗಳು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಮರಳಿ ವಾರಸುದಾರರಿಗೆ ಒಪ್ಪಿಸಿದ ಕಂಪ್ಲಿ ಪೊಲೀಸರು

0

ಕಂಪ್ಲಿ & ತೆಕ್ಕಲಕೋಟೆ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಮೊಬೈಲ್ ಗಳನ್ನು CEIR PORTAL ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿದೆ,

ಬೀದರ ಜಿಲ್ಲೆಯ ಜನವಾಡಾ ಪೊಲೀಸರಿಂದ ಮಟಕಾ ಜೂಜಾಟದ ಮೇಲೆ ದಾಳಿ

0

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಜನವಾಡಾ ಪೊಲೀಸ್ ಠಾಣಾ ವ್ಯಾಪ್ತಿಯು ಮರಖಲ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಮಾಹಿತಿಯಂತೆ, ಶ್ರೀ ಬಾಷುಮಿಯಾ, ಪಿ.ಎಸ್.ಐ ರವರು ತಮ್ಮ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಿ ಅವನಿಂದ 740=00 ರೂಪಾಯಿ ವಶ ಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನಿನ ರಿತ್ಯ ಕ್ರಮ ಕೈಕೊಳ್ಳಲಾಗಿದೆ.

ಮಟಕಾ ಜೂಜಾಟ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.