BENGALURU: ಮದುವೆ ಮನೆಗಳನ್ನೇ ಗುರಿಯಾಗಿಸಿಕೊಂಡು, ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಖದೀಮನನ್ನು, ಮದುವೆ ಸಂಭ್ರಮದಲ್ಲಿದ್ದ ಸಂಬಂಧಿಕರರೇ ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಕಾಟಂನಲ್ಲೂರು ಕ್ರಾಸ್ ಬಳಿಯ ಮದುವೆ ಕಲ್ಯಾಣ ಮಂಟಪಕ್ಕೆ ಸಂಬಂಧಿಕರ ಮದುವೆಗೆ ದೂರುದಾರರು ಹೋಗಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಕಲ್ಯಾಣ ಮಂಟಪದ ಮೊದಲನೇ ಮಹಡಿಯ ಕೊಠಡಿಯ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ಆತನನ್ನು ಹಿಡಿದು ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಆವಲಹಳ್ಳಿಯ ಗೊರವಿಗೆರೆಯ ನಿವಾಸಿ 41 ವರ್ಷದ ಆಸೀಪ್ನನ್ನು ವಶಕ್ಕೆ ಪಡೆದುಕೊಂಡ ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಅವರು ವಿಚಾರಣೆಗೆ ಒಳಪಡಿಸಿದಾಗ, ದುಶ್ಚಟ ಹಾಗೂ ಸಾಲ ತೀರಿಸಲು ಹಣಕ್ಕಾಗಿ ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದುದಾಗಿ, ಕದ್ದ ಚಿನ್ನಾಭರಣಗಳನ್ನು ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನವಿಟ್ಟಿದ್ದ, ಈತನ ಮಾಹಿತಿ ಮೇರೆಗೆ 47 ಲಕ್ಷ ರೂಪಾಯಿ ಮೌಲ್ಯದ 340 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಐಪಿಎಸ್ ಅವರ ನಿರ್ದೇಶನದಂತೆ, ವೈಟ್ಫೀಲ್ಡ್ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ, ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಬಿ ಆರ್ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ರೇವಣಸಿದ್ದಪ್ಪ ಜಿ ಜೀರಂಕಾಳಗಿ, ನವೀದ್, ಎಎಸ್ಐ ಪ್ರಭಾಕರ್, ಸಿಬ್ಬಂದಿಗಳಾದ ದೇವೆಂದ್ರ ನಾಯಕ, ಜಟ್ಟಿಂಗರಾಯ, ಮಣಿ, ಹರೀಶ್, ಕಿರಣ್, ನಾಗರಾಜ್, ಫಿರೋಜ್ಅಹಮದ್, ನಾಗೇಶ್, ಮಂಜುನಾಥ, ಶರಣಪ್ಪ ಹರಿ ಅವರುಗಳ ತಂಡ ಕುಖ್ಯಾತ ಮನೆಗಳ್ಳನನ್ನು ಹಾಗೂ ರಿಸಿವರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


