ಬೀದರ ನಿವಾಸಿಯೊಬ್ಬರು ಬೀದರ ಗುಂಪಾ ಹತ್ತಿರದ Reliance Trends ದಲ್ಲಿ 10,000=00 ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನು ಖರೀದಿಸಿ ಆಟೊದಲ್ಲಿ ಗುಂಪಾದಿಂದ ಪ್ರಯಾಣಿಸಿ ಬೀದರದ ಗುರುದ್ವಾರ್ ಕಮಾನ ಹತ್ತಿರ ಇಳಿದುಕೊಂಡು ಹೋಗಿರುತ್ತಾರೆ. ಸ್ವಲ್ಪ ಸಮಯದ ನಂತರ ತಮ್ಮ ಹತ್ತಿರದ ಬ್ಯಾಗಿನ ಬಗ್ಗೆ ಅರಿವು ಆದಾಗ ತಮ್ಮ ಬ್ಯಾಗನ್ನು ಆಟೋದ ಹಿಂದುಗಡೆ ಸಿಟಿನ ಮೇಲೆ ಬಿಟ್ಟಿರುವುದನ್ನು ಗಮನಿಸಿ, ಪ್ರಯಾಣಿಕ ಬೀದರದ AI ಸಿ.ಸಿ ಟಿವಿ ಕಮಾಂಡ ಸೆಂಟರ್ ಗೆ ಬಂದು ತಾವು ಪ್ರಯಾಣಿಸಿದ ಆಟೋವನ್ನು AI ಸಿ.ಸಿ ಟಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಹರ್ಷವರ್ಧನ ರವರು ಡಾ: ಬಿ.ಆರ್ ಅಂಬೇಡ್ಕರ ವೃತ್ತದ ಹತ್ತಿರ ವಾಹನ ಸಂಚರಿಸುತ್ತಿದ್ದನ್ನು ಗಮನಿಸಿ ಶ್ರೀ ಶ್ರೀಕಾಂತ, ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರವರ ಸಹಾಯದಿಂದ ಆಟೋವನ್ನು ಬೀದರ ಜಿಲ್ಲಾ ಪೊಲೀಸ್ ಅಧಿಕ್ಷಕರ ಕಛೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ, ಆಟೋದ ಹಿಂದುಗಡೆ ಇದ್ದ ಬ್ಯಾಗನ್ನು ಶ್ರೀ ಹರ್ಷವರ್ಧನ ಮತ್ತು ಶ್ರೀ ಶ್ರೀಕಾಂತ ರವರ ಸಮಕ್ಷಮ ಆಟೋ ಡ್ರೈವರ ರವರ ಮುಖಾಂತರ ಬ್ಯಾಗಿನ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪ್ರಮಾಣಿಕತೆ ಮೇರೆದ ಆಟೋ ಸಂ: KA38 6701 ಚಾಲಕ ಶ್ರೀ ಮಂಜುನಾಥ ರವರಿಗೆ ಸಮಸ್ತ ಬೀದರ ಜಿಲ್ಲಾ ಪೊಲೀಸರಿಂದ ಅಭಿನಂದನೆಗಳು. ನಿಮ್ಮ ಪ್ರಾಮಾಣಿಕತೆ ಎಲ್ಲರಿಗೂ ಪ್ರೇರಣೆ ಆಗಲಿ.




