Saturday, February 14th, 2026 12:21 PM
[ditty id=171]

ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿಬ್ಬಂಧಿಯವರಿಗೆ ಸನ್ಮಾನ

ಶಿವಮೊಗ್ಗ: “ಮನೆ ಮನೆಗೆ ಪೊಲಿಸ್‌” ಭೇಟಿ ಕರ್ತವ್ಯದ ವೇಳೆ ಪೋಷಕತ್ವದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಆಶ್ರಯ ಕಲ್ಪಿಸಲು ಶ್ರಮವಹಿಸಿ, ಉತ್ತಮ ಕರ್ತವ್ಯ ಮಾಡಿದ ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿಬ್ಬಂಧಿಯವರಾದ ಶ್ರೀ ಆನಂದ ಹೆಚ್‌.ವಿ ಸಿಹೆಚ್‌ಸಿ ರವರಿಗೆ ಸನ್ಮಾನ.

ರಾಜ್ಯ ಸರ್ಕಾರದ ನೂತನ ಯೋಜನೆ ಮನೆ ಮನೆ ಪೊಲೀಸ್‌ ಭೇಟಿ ಯೋಜನೆಯನ್ವಯ ಶ್ರೀ ಮಿಥುನ್‌ ಕುಮಾರ್‌ ಜಿ ಕೆ, ಐಪಿಎಸ್‌, ಮಾನ್ಯ ಪೊಲೀಸ್‌ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.

ಆ ನಿಟ್ಟಿನಲ್ಲಿ ದಿನಾಂಕ 04/08/2025 ರಂದು ಭದ್ರಾವತಿ ಉಪ ವಿಭಾಗ ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿ.ಹೆಚ್‌.ಸಿ ರವರಾದ ಶ್ರೀ ಆನಂದ ಹೆಚ್‌.ವಿ ರವರು ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್‌ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಪೋಷಕರಿಬ್ಬರೂ ಮೃತಪಟ್ಟ 09 ವರ್ಷ ಹಾಗೂ 03 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಪೋಷಕತ್ವದಿಂದ ವಂಚಿತರಾಗಿರುವುದು ಕಂಡು ಬಂದಿರುತ್ತದೆ. ಅವರಿಗೆ ಆಶ್ರಯ ಕಲ್ಪಿಸುವ ಸಂಬಂಧ ಭದ್ರಾವತಿಯ ಡಾನ್‌ ಬೋಸ್ಕೋ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗರವರನ್ನು ಸಂಪರ್ಕಿಸಿ, ಇಬ್ಬರೂ ಪುಟ್ಟ ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವುದರ ಉತ್ತಮ ಕರ್ತವ್ಯ ಮಾಡಿ, ಘನ ರಾಜ್ಯ ಸರ್ಕಾರದ ಮನೆ ಮನೆ ಪೊಲೀಸ್‌ ಯೋಜನೆಯ ಉದ್ದೇಶವನ್ನು ಕಾರ್ಯಗತಗೊಳಿಸಿರುತ್ತಾರೆ.

ಶ್ರೀ ಆನಂದ ಹೆಚ್‌.ವಿ ರವರ ಈ ಉತ್ತಮ ಕರ್ತವ್ಯಕ್ಕಾಗಿ ದಿನಾಂಕಃ 11-08-೨೦೨೫ ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವತಿಯಿಂದ ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ, ಶ್ರೀ ಆನಂದ ಹೆಚ್‌.ವಿ ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ರವಿಸಲಾಯಿತು.

Related Articles

TRENDING ARTICLES

error: Content is protected !!