ಉಡುಪಿ: ಶಂಕರನಾರಾಯಣ ಠಾಣಾ ವ್ಯಾಪ್ತಿಯ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕೇಂದ್ರ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಅದರ ಬಗ್ಗೆ ಮಾಹಿತಿ ಗಳ ಬಗ್ಗೆ ಸದ್ರಿ ಕಾಲೇಜು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಲಾಯಿತು. ಹಾಗೂ ಕಾಲೇಜು ಪರಿಸರದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಇದರ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಕಾಲೇಜು ಹಂತದಲ್ಲಿ ಹೊಸದಾಗಿ ಆಗಿರುವ ಡ್ರಗ್ಸ್ ಕಮಿಟಿ ಇದರ ಬಗ್ಗೆ ತಿಳಿಸಲಾಯಿತು. ಸಂಚಾರ ನಿಯಮ ಹಾಗೂ 112 ಸಹಾಯವಾಣಿ, ಸೈಬರ್ ಅಪರಾದ ಹಾಗೂ 1930 ತುರ್ತು ಕರೆ ಇದರ ಬಗ್ಗೆ ವಿವರವಾಗಿ ತಿಳಿಸಲಾಯಿತು.



