ಮೈಸೂರು ನಗರದ ಮಂಡಿ, ನಜರ್ ಬಾದ್, ಕೃಷ್ಣರಾಜ & ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿದ್ದು, ಬೀಟ್ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪ್ರದೇಶದ ಭದ್ರತೆ, ಶಂಕಿತ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವುದು, ಹಾಗೂ ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.







