Police TV Karnataka

ಇಬ್ಬರ ಬೈಕ್ ಖಧೀಮರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ ವಶ


ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಪಿ.ಸುನಿಲ್ ರವರ ಆದೇಶದಂತೆ ಅಪರಾದ ವಿಭಾಗದ ಪಿ.ಎಸ್.ಐ ರವರಾದ ಕೆ.ಎ.ಚಂದ್ರ ಹಾಗೂ ಸಿಬ್ಬಂದಿಗಳಾದ ಎ.ಆರ್.ಎಸ್.ಐ ಸಂಜಯ್ ಹೆಚ್.ಸಿ-151 ನಾರಾಯಣ, ಹೆಚ್.ಜಿ ರೆಹಮಾನ್ ಉರ್ ಅಜೀಜ್ ರವರುಗಳು ದಿನಾಂಕಃ 07.07.2026 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಕಡಕೊಳ ಉಪಪೊಲೀಸ್ ಠಾಣೆಯ ಮುಂಭಾಗ ವಾಹನಗಳ ತಪಾಸಣೆ ಕೈಗೊಳ್ಳುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಒಂದು ಹೀರೋ ಸ್ಲೆಂಡರ್ ಬೈಕ್‌ನಲ್ಲಿ ಇಬ್ಬರೂ ಆಸಾಮಿಗಳು ಬರುತ್ತಿದ್ದು ಸದರಿ ವಾಹನವನ್ನು ನಿಲ್ಲಿಸಿ ವಿಚಾರಣೆ ಮಾಡಲಾಗಿ ಸದರಿ ವಾಹನವನ್ನು ಕಳ್ಳತನ ಮಾಡಿರುವುದಾಗಿ ಹಾಗೂ ಇನ್ನೂ ಕೆಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿ ಮೊ.ಸಂ 248/2026 ಕಲಂ 303(2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1) ನವಾಜ್ ಖಾನ್ @ ಸೂಪಿ ಬಿನ್ ಅಮ್ಜದ್ ಖಾನ್, 25 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, # 174, 3 ನೇ ಕ್ರಾಸ್, ಮಹದೇವಪುರ, ಮೈನ್ ರೋಡ್, ಶಾಂತಿನಗರ, ಸೊಸೈಟಿ ಪಕ್ಕ, ಮೈಸೂರು,
2) ಮಹಮ್ಮದ್ ಫರಾನ್ ಬಿನ್ ಇಲಿಯಾಜ್ ಅಹಮದ್, 22 ವರ್ಷ, ಮುಸ್ಲಿಂ ಜನಾಂಗ, ಕಡ್ಲೆ ಬೀಜ ವ್ಯಾಪಾರ, ಮೀನಾಬಜಾರ್ ಹತ್ತಿರ, ಮನೆ ನಂ 847, 13 ನೇ ಕ್ರಾಸ್, ಉಸ್ಮಾನಿಯಾ ಸಿ ಬ್ಲಾಕ್ ಬೀಡಿ ಕಾಲೋನಿ, ಮೈಸೂರು
ಇಬ್ಬರು ಕಳ್ಳರಿಂದ ವಶಪಡಿಸಿಕೊಂಡ ದ್ವಿಚಕ್ರವಾಹನಗಳ ವಿವರ
1)ಏಂ-11 ಇW-4219, ಪ್ಯಾಶನ್ ಪ್ರೊ ಬೈಕ್,
2)ಏಂ-02, ಊಓ-672 ಬಜಾಜ್ ಡಿಸ್ಕವರಿ ಬೈಕ್,
3)ಏಂ-45 W-9984 ಟಿವಿಎಸ್ ಅಪ್ಪಾಚಿ ಖಖಿಖ ಬೈಕ್
4)ಏಂ-55. W-5470 ಹೋಂಡಾ ಆಕ್ಟೀವಾ ಸ್ಕೂಟರ್
5) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್
6)ಏಂ-01 ಇಘಿ-5304 ಹೋಂಡಾ ಆಕ್ಟೀವಾ ಸ್ಕೂಟರ್,
7) ನಂಬರ್ ಪ್ಲೇಟ್ ಇಲ್ಲದ ಹೀರೋ ಸ್ಲೆಂಡರ್ ಬೈಕ್,
8) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್,
9) ನಂಬರ್ ಪ್ಲೇಟ್ ಇಲ್ಲದ ಮ್ಯಾಸ್ಟ್ರೋ ಬೈಕ್,

ಅಮಾನತ್ತು ಪಡಿಸಿಕೊಂಡ 09 ಬೈಕ್‌ಗಳ ಒಟ್ಟು ಮೌಲ್ಯ ಸುಮಾರು 3,90,000/- ರೂಪಾಯಿಗಳಾಗಿರುತ್ತದೆ.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್, ಅಪರ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್, ಹಾಗೂ ನಾಗೇಶ್ ಎಲ್. ಮೈಸೂರು ಗ್ರಾಮಾಂತರ ಉಪ-ವಿಭಾಗದ ಉಪಾದೀಕ್ಷಕರಾದ ರಾಜಣ್ಣ, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ನಿರೀಕ್ಷಕರಾದ ಎಸ್.ಪಿ. ಸುನಿಲ್, ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಕೆ ಎ ಚಂದ್ರ, ಸಿಬ್ಬಂದಿಗಳಾದ ಎಆರ್ ಎಸ್ ಐ, ಸಂಜಯ್, ಹೆಚ್ ಸಿ-151 ನಾರಾಯಣ, ಪ್ರಕಾಶ್ ಎಲ್. ಸಿ. ಹೆಚ್. ಸಿ.-322, ಪವನ್ ಕುಮಾರ್ ಪಿಸಿ-30, ಯೋಗೇಶ ಪಿಸಿ-276, & ಹೆಚ್ ಜಿ- ರೆಹಮಾನ್ ಉರ್ ಅಜೀಜ್ ಮತ್ತು ಪೊಲೀಸ್ ಬಾತ್ಮೀದಾರರಾದ ಲಕ್ಷ್ಮಣರಾವ್, ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Exit mobile version