Indian Police TV

ಬೀದರ ಜಿಲ್ಲಾ ಪೊಲೀಸ್ ರಿಂದ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಕೊಂಡ ಕ್ರಮ

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ” ಜಿಲ್ಲೆಯನ್ನು ಶಾಂತಯುತವಾಗಿ ಇಡಲು ಕಾನೂನು ಸೂ ವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲಾದಾದ್ಯಂತ ಸಾರಿಗೆ ನೌಕರರ ಮುಷ್ಕರ ಬ/ಬ, ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಪುರಾತನವಾದ ಅಗಸಿ (ಬೇಸ್) ಸ್ಥಳದಲ್ಲಿ ಗಡಿಯಾರವನ್ನು ಅಳವಡಿಸುವ ಕಾರ್ಯಕ್ರಮದ ಬ/ಬ, ನೂತನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈ ಭೀಮ್ ಘರ್ಜನೆ ಸಮಿತಿ (ರಿ) ಕರ್ನಾಟಕ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ಬಗ್ಗೆ ವ್ಯಂಗವಾಗಿ ಮಾತಡಿರುವದನ್ನು ಖಂಡಿಸಿ ಪ್ರತಿಭಟನಾ ರಾಲಿ ಬ/ಬ ಹಾಗೂ ಜಿಲ್ಲೆಯಲ್ಲಿ ಗಣ್ಯರ ಮತ್ತು ಅತೀ ಗಣ್ಯರ ಕಾರ್ಯಕ್ರಮಗಳು, ಪ್ರವಾಸಗಳ ಸಮಯದಲ್ಲಿ ಅವರ ಸುರಕ್ಷತೆಯನ್ನು ಒದಗಿಸುದ್ದು ಮತ್ತು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆಗೆ ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.

ಜಿಲ್ಲೆಯ ಮೂರು ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವುದು ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

Exit mobile version